ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅರಮನೆ ಮುಂಭಾಗ ದಸರಾ
ರಂಗೋಲಿ ಸ್ಪರ್ಧೆ.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ
ಮೈಸೂರಿನಲ್ಲಿ 2ನೇ ದಿನದ ದಸರಾ ಸಂಭ್ರಮ ರಂಗೇರಿದೆ ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು
ರಂಗೋಲಿ ಸ್ಪರ್ಧೆಗೆ ಚಾಲನೆ ನೀಡದ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ದಸರಾ ಎಂದು ರಂಗೋಲಿ ಬರೆಯುವ ಮೂಲಕ ಸ್ಪರ್ಧೆಗೆ ಚಾಲನೆ.
ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿರುವ 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಬಾರಿ ರಂಗೊಲಿಗಳಾದ ಯೋಗ ಚಿತ್ರ, ಜಂಬೂಸವಾರಿ, ಭಾರತ ಮಾತೆ ಚಿತ್ರ,ದುರ್ಗಾ ದೇವಿ,ನಂದೀಶ್ವರ, ಮಹಿಷಾಶ್ವರ ಚಿತ್ರ, ಆನೆ ಅಂಬಾರಿ , ಗಂಡು ಭೇರುಂಡ, ಇನ್ನೂ ಮುಂತಾದ ಚಿತ್ರಗಳನ್ನು ವರ್ಣರಂಜಿತವಾಗಿ ರಂಗೋಲಿ ಬಿಡಿಸುವ ಮೂಲಕ ಪ್ರತಿಭೆಯನ್ನು ತೋರ್ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಪಾರಂಪರಿಕ ವಾಗಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಪ್ರತಿ ಒಂದು ಮನೆ ಮನೆಯಲ್ಲಿ ಇರುವಂತಹ ರಂಗೋಲಿ ಬಿಡಿಸುವ ಸ್ಪರ್ಧೆ ಇಂದು ನಡೆಯುತ್ತಿದ್ದೆ ಇದು ವೈಜ್ಞಾನಿಕ ವಾಗಿ ರಂಗೋಲಿ ಹಾಕುವುದರಿಂದ ಆರೋಗ್ಯ ವೃದ್ಧಿಸುತ್ತದೆ ಇದರಿಂದ 8 ಆಸನಗಳ ವ್ಯಾಯಾಮ ಸಿಗಲಿದೆ ಕಣ್ಣು ಬುದ್ದಿ ಚುರುಕಾಗುತದ್ದೇ ಎಂದರು
ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ಯಲ್ಲಿ ಭಾಗವಹಿಸಿದ ಸ್ಪರ್ದಾಳಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

