ಆರ್ಎಸ್ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಗುಜರಾತ್ನಲ್ಲಿ ನಡೆದ ದ್ವಿಶತಾಬ್ದಿ ಪಾಟೋತ್ಸವ ಸಮಾರಂಭದಲ್ಲಿ ಭಾಷಣ
ಖೇಡಾ (ಗುಜರಾತ್) | ಮಾರ್ಚ್ 6:
ಮೋಹನ್ ಭಾಗವತ್, ರಾಷ್ತ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು, ಗುಜರಾತ್ನ ಖೇಡಾದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನ, ಖೇಡಾ ದೇವಾಲಯದಲ್ಲಿ ನಡೆದ ಶ್ರೀ ರೇವತಿ ಬಾಲದೇವಜಿ ಹರಿಕೃಷ್ಣ ಮಹಾರಾಜರ 200ನೇ ವರ್ಷದ ದ್ವಿಶತಾಬ್ದಿ ಪಾಟೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಗಳ ಮಹತ್ವವನ್ನು ಒತ್ತಿಹೇಳಿದರು ಮತ್ತು ದೇವಸ್ಥಾನಗಳು ಸಮಾಜದ ಮೌಲ್ಯಗಳನ್ನು ಬಲಪಡಿಸಲು, ಏಕತೆ ಹೆಚ್ಚಿಸಲು ಹಾಗೂ ಸಮಾಜಸೇವೆಗೆ ಪ್ರೇರಣೆ ನೀಡಲು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಸ್ವಾಮಿನಾರಾಯಣ ಪರಂಪರೆ ಜನರನ್ನು ಆಧ್ಯಾತ್ಮ ಮತ್ತು ಸಮಾಜಸೇವೆಯ ಮಾರ್ಗದಲ್ಲಿ ಮುನ್ನಡೆಸುತ್ತಿರುವುದನ್ನು ಅವರು ಪ್ರಶಂಸಿಸಿದರು.

ಈ ಸಮಾರಂಭದಲ್ಲಿ ಅನೇಕ ಭಕ್ತರು, ಸಂತರು ಹಾಗೂ ಗಣ್ಯರು ಭಾಗವಹಿಸಿದ್ದರು. ದ್ವಿಶತಾಬ್ದಿ ಆಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಹಿಂದ್ ಸಮಾಚಾರ್ ನ್ಯೂಸ್ ಡೆಸ್ಕ್
ವರದಿ:- ಅಭಿಲಾಷ್ ಸಿ ಜಿ

