🏅 ಶಿವಮೊಗ್ಗ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ
ಹಿಂದ್ ಸಮಾಚಾರ ನ್ಯೂಸ್ | ಮಾರ್ಚ್ 2026:
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣವಾಗಿ, 2025ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿಗಳ ಪದಕಕ್ಕೆ ಮೂವರು ಅಧಿಕಾರಿ ಹಾಗೂ ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ. ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಸಮರ್ಪಣೆಯನ್ನು ಗೌರವಿಸಿ ಈ ಪದಕ ಪ್ರದಾನ ಮಾಡಲಾಗಿದೆ.
ಪದಕ ಪಡೆದವರು:
ಶ್ರೀ ಎಸ್. ರಮೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ

ಶ್ರೀ ಅಣ್ಣಪ್ಪ ಎನ್., ಹೆಡ್ ಕಾಂಸ್ಟೇಬಲ್ (HC-71), ಹೊಳೆಹೊನ್ನೂರು ಪೊಲೀಸ್ ಠಾಣೆ

ಶ್ರೀ ರಾಘವೇಂದ್ರ ಜಿ., ಹೆಡ್ ಕಾಂಸ್ಟೇಬಲ್ (HC-336), ಹಳೆ ನಗರ ಪೊಲೀಸ್ ಠಾಣೆ

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಅವರು, ಪದಕ ಪಡೆದವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.
ಅವರು ಇವರ ಸೇವಾ ಮನೋಭಾವ, ಶಿಸ್ತಿನ ನಡೆ ಮತ್ತು ಕರ್ತವ್ಯನಿಷ್ಠೆಯನ್ನು ಪ್ರಶಂಸಿಸಿ, ಇಂತಹ ಗೌರವಗಳು ಸಂಪೂರ್ಣ ಪೊಲೀಸ್ ಪಡೆಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.
ಈ ಸಾಧನೆ ಶಿವಮೊಗ್ಗ ಪೊಲೀಸ್ ಇಲಾಖೆಗೆ ಹೆಮ್ಮೆಯನ್ನು ತಂದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ಸುರಕ್ಷತೆ ಅವರ ನಿರಂತರ ಪ್ರಯತ್ನಗಳನ್ನು ಎತ್ತಿಹಿಡಿಯುತ್ತದೆ.

ವರದಿ : ಮೇಘನ ಗಣೇಶ್



