ಕಲುಷಿತ ನೀರನ್ನು ನಿಲ್ಲಿಸಿ ಎಂದು ಸಿದ್ಧಲಿಂಗೇಶ್ವರ ಬಡಾವಣೆ, ಜೆ.ಪಿ.ನಗರ,ಭಾಗದಲ್ಲಿ ಬಿರುಸಿನ ಪಾದಯಾತ್ರೆ.
ಇಂದು ಬೆಳ್ಳಗೆ ಯಿಂದ ಎಲ್ಲ ಸಾರ್ವಜನಿಕ ಕರು ಮತ್ತು ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಮನೆ ಮನೆ ಗಳಿಗೆ ತೆರಳಿ ಅವರ ಸಮಸ್ಯೆ ಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನ..
ಟಿ.ಎಸ್. ಶ್ರೀ ವತ್ಸ ಶಾಸಕ
ಉಮಾ ..ಗೃಹಿಣಿ
ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು ಇದು ಸುಮಾರು ಒಂದು ತಿಂಗಳಿನಿಂದ ಬರುತ್ತದೆ ಎಂದು ಮನವಿ ಮಾಡಿದರು ತಕ್ಷಣ ಅಧಿಕಾರಿಗಳಿಗೆ ಈ ಕೂಡಲೇ ನೀರು ಸಂಗ್ರಹ ಮಾಡಿ ನೀರನ್ನು ಪರೀಕ್ಷಿಸಲು ಆದೇಶ ಮಾಡಿ ಈ ರೀತಿಯ ಘಟನೆ ಮತ್ತೆ ಮರುಕಳಿಸಬಾರದೆಂದು ಸೂಚಿಸದರು…
ಶಿವಪ್ಪ ..ವ್ಯಾಪಾರಿ
ಸಿದ್ಧಲಿಂಗೇಶ್ವರ ಬಡಾವಣೆಯ ಜನರು ಕಷ್ಟ ಅನುಭವಿಸುತ್ತಿದ್ದಾರೆ ಈ ಭಾಗದ ಜನರ ಕಟ್ಟಡ ಕಟ್ಟಲು ನಗರಪಾಲಿಕೆ, ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಲೈಸೆನ್ಸ್ ಕೊಡುವುದನ್ನು ಸ್ಥಗಿತಗೊಳಿಸಿದೆ ಕಟ್ಟಡ,ಪೂರ್ಣ ಗೊಂಡ ನಿರಿಕ್ಷಪೇಣಾ ಪತ್ರ ವನ್ನು ಕೂಡ ಸ್ಥಗಿತ ಗೊಳಿಸಿದ್ದರೆ ದಯಮಾಡಿ ಅಧಿಕಾರಿಗಳೊಂದಿಗೆ ಮಾತನಾಡಿ ನ್ಯಾಯ ಕೊಡಿಸಿ ಎಂದರು..

ಶಿವಕುಮಾರ್. ಇಂಜಿನಿಯರ್
ಸಿದ್ಧಲಿಂಗೇಶ್ವರ ಬಡಾವಣೆಯ 5 ನೇ ಕ್ರಾಸ್ ನ ಬಳಿ ಮೋರಿ ತುಂಬಾ ಚಿಕ್ಕದಾಗಿದ್ದು, ಮಳೆ ಬಂದರೆ ಮಳೆ ನೀರು ಈ ಭಾಗದ ಮನೆ ಗಳಿಗೆ ಬರುತ್ತಿದೆ ದಯಮಾಡಿ ಪರಿಹಾರ ಮಾಡಿ ಕೊಡಿ ಮನವಿ….
ನಂತರ
ತಕ್ಷಣ ಸಂಬಧ ಪಟ್ಟ ಅಧಿಕಾರಿಗಳ ಕರೆದು ಮೊರಿ ಸರಿಪಡಿಸಿ ನಂತರ ಮಳೆ ನೀರು ಸಲಿಸಾಗಿ ಹೊಗುವಾಗ ಹಾಗೆ ಕೂಡಲೆ ಕ್ರಮ ತೆಗೆದು ಕೊಳ್ಳಬೇಕು ಎಂದು ಆದೇಶಿಸಿದರು
ಈ ಸಂಧರ್ಭದಲ್ಲಿ ಶಾರದಮ್ಮ ಈಶ್ವರ, ದೇವರಾಜೇ ಗೌಡ,ಮಹೇಂದ್ರ, ನಾಗರಾಜ್ ಟಿ.ವಿ.ಎಸ್,ಅಕ್ಷಯ್,ಶಿವಪ್ಪಾಜೀ,ಗುರು ಬಸಪ್ಪ, ಓಂ ಶ್ರೀನಿವಾಸ,ದೀಪಕ್,ಹರೀಶ್, ಮಹೇಶ್ ಗೆಜ್ಜಗಳ್ಳಿ,ರೇಣುಕಾ, ಸೋಮಸುಂದರ್,ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್,ಮುಂತಾದವರು ಇದ್ದರು
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116


