ವಿಜಯಪುರದಲ್ಲಿ ರಕ್ತದಾನ ಮಾಡಿದ ಮೈಸೂರು ಪತ್ರಕರ್ತರು

ನಂದಿನಿ ‌ಮೈಸೂರು

ವಿಜಯಪುರದಲ್ಲಿ ನಡೆದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಮೈಸೂರಿನ ಪತ್ರಕರ್ತರು ರಕ್ತದಾನ ಮಾಡಿದ್ದಾರೆ.

       ಹುಟ್ಟು ಹಬ್ಬ,ವಾರ್ಷಿಕೋತ್ಸವ, ಸಮಾರಂಭಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದಿದ್ದನ್ನ ಸುದ್ದಿ ಬರೆಯುತ್ತಿದ್ದ ಪತ್ರಕರ್ತರು ಇದೀಗ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ.

      ಪಿರಿಯಾಪಟ್ಟಣ ಪವನ್,ಮೈಸೂರಿನ ನಾಗೇಶ್,ರವಿ,ಹಂಚ್ಯಾ ರವಿ ಸೇರಿದಂತೆ ಇನ್ನಿತರರು ವಿಜಯಪುರದಲ್ಲಿ ಆಯೋಜಿಸಿದ್ದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

      ವಿಜಯಪುರದ ಶಿವಗಿರಿ ಬ್ಲಡ್ ಸೆಂಟರ್ ನ ವೈದ್ಯರು ರಕ್ತದಾನ ಮಾಡಿದ ಪತ್ರಕರ್ತರಿಗೆ ಪ್ರಮಾಣ ಪತ್ರ ವಿತರಿಸಿದರು.ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಕೃಷ್ಣ,ಉಮಾಶಂಕರ್ ,ಮಂಜುನಾಥ್, ನಂದಿನಿ ಸೇರಿದಂತೆ ಮೈಸೂರು ಪತ್ರಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *