ಪಿರಿಯಾಪಟ್ಟಣ: ಕುರುಬ ಜನಾಂಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಡಿ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನ ಕಾರ್ಯಕ್ರಮ.

ಪಿರಿಯಾಪಟ್ಟಣ ತಾಲ್ಲೂಕು ಕುರುಬ ಜನಾಂಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಡಿ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದಿಸಲಾಯಿತು.
ಪಟ್ಟಣದ ಹೆಚ್.ಡಿ ಗಣೇಶ್ ಅವರ ನಿವಾಸದಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಪುತ್ರ ಯುವ ಮುಖಂಡ ನಿತಿನ್ ವೆಂಕಟೇಶ್ ಅವರು ಅಭಿನಂದಿಸಿ, ಮಾತನಾಡಿ ಸರ್ವ ಜನಾಂಗದವರನ್ನು ಸಮನಾಗಿ ಕಂಡು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಂಘಟನಾ ಚತುರ ಎಚ್.ಡಿ ಗಣೇಶ್ ಅವರಿಗೆ ಕುರುಬ ಜನಾಂಗದ ತಾಲ್ಲೂಕು ಅಧ್ಯಕ್ಷ ಪಟ್ಟ ದೊರೆತಿರುವುದು, ಸಂತಸಕರ ಎಂದರು.
ಈ ಸಂದರ್ಭ ಕನಕ ಪತ್ತಿನ ಸಹಕಾರ ಸಂಘ ನಿರ್ದೇಶಕ ಲೋಹಿತ್ ಪಂಚವಳ್ಳಿ, ಕಾಂಗ್ರೆಸ್ ಯುವ ಘಟಕ ಅಧ್ಯಕ್ಷರಾದ ರಘುಗೌಡ, ಹರೀಶ್, ಯುವ ಮುಖಂಡರಾದ ರಕ್ಷಿತ್, ಮುರುಳಿ, ಪ್ರಸಾದ್, ಸಂತೋಷ್, ಮೋದೇಶ್, ನಂದೀಶ್, ಮಕ್ಸೂದ್ ಮತ್ತಿತರಿದ್ದರು.
ವರದಿ ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

