ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವುಗೊಳಿಸುವಲ್ಲಿ ಸಹಕರಿಸಿದರು

ಸಾಗರ: ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವುಗೊಳಿಸುವಲ್ಲಿ ಸಹಕರಿಸಿದರು.

ಸಾಗರ ಪಟ್ಟಣದ ಹಳೆ BH ರಸ್ತೆ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಏಕಾಏಕಿ ಮರವೊಂದು ಧರೆಗೆಉರುಳಿತು ರಸ್ತೆಯಲ್ಲಿ ಅದೇ ಸಮಯದಲ್ಲಿ ವಾಹನಗಳು ಬರುತ್ತಾ ಇದ್ದರು ಅದೃಷ್ಟವಶಾತ್ ಯಾವುದೇ ಅಪಾಯವಾಗಲಿಲ್ಲ ಅದೇ ರಸ್ತೆಯಲ್ಲಿ ಬರುತ್ತಿದ್ದ ಸಾಗರ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಇತರರು ಮರವನ್ನ ರಸ್ತೆಯ ಬದಿಗೆ ಸರಿಸಿ ಸಂಚಾರ ತೆರವುಗೊಳಿಸುವಲ್ಲಿ ಸಹಕರಿಸಿದರು.

ಮಳೆಗಾಲ ವಿಪರೀತ ಇರುವುದರಿಂದ ಸಾಗರ ಪಟ್ಟಣದ ಒಳಗೆ ರಸ್ತೆ ಬದಿಯಿರುವ ಮರಗಳು ತುಂಬ ಅಪಾಯಕಾರಿಯಾಗಿವೆ ಇಂತಹ ಅಪಾಯಕಾರಿಯಾಗಿರುವ ಹಳೇ ಮರಗಳನ್ನು ತೆರವುಗೊಳಿಸುವುದು ಸೂಕ್ತ. ಇಲ್ಲದಿದ್ರೆ ಯಾರಿಗಾದ್ರೂ ಪ್ರಾಣಕ್ಕೆ ಸಂಚಕಾರ ತರಬಹುದು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *