ಹಿಂದೂ ಜಾಗರಣಾ ವೇದಿಕೆಯ ಮನವಿಗೆ ಸ್ಪಂದಿಸಿದ ಪೋಲಿಸ್ ಇಲಾಖೆ, ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ವಿರೋಧಿ ಘೋಷಣೆ ಕೂಗಿದ ಮೂವರ ಬಂಧನ ಮತ್ತು ವಾಹನ ಪೋಲಿಸ್ ವಶಕ್ಕೆ

ಹಿಂದೂ ಜಾಗರಣಾ ವೇದಿಕೆಯು ಇಂದು ಬೆಳಿಗ್ಗೆ ಸಾಗರದ ಡಿವೈಎಸ್’ಪಿ ಗೋಪಾಲಕೃಷ್ಣ ತಿ. ನಾಯಕ್ ಅವರಿಗೆ ನಿನ್ನೆ ದಿನ ಸಾಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಮನವಿಯನ್ನು ನೀಡಿತ್ತು. ಹಿಂದೂ ಜಾಗರಣಾ ವೇದಿಕೆಯ ಈ ಮನವಿಗೆ ಸ್ಪಂದಿಸಿದ ಪೋಲಿಸ್ ಇಲಾಖೆ, ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ ವಿರೋಧಿ ಘೋಷಣೆ ಕೂಗಿದ ಮೂವರ ಬಂಧನ ಮತ್ತು ವಾಹನವನ್ನು ಪೋಲಿಸ್ ವಶಕ್ಕೆ ಪಡೆದಿದೆ.
ಈ ಯಶಸ್ಸಿಗೆ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಸಾಗರ ಡಿವೈಎಸ್’ಪಿಯವರಿಗೂ ಮತ್ತು ಪೋಲಿಸ್ ಇಲಾಖೆ ಅಭಿನಂದನೆ ಸಲ್ಲಿಸಿದ್ದಾರೆ.



